ಕಲಬುರಗಿ : ಸೆಪ್ಟೆಂಬರ್ 9 ಮತ್ತು 10 ಎರಡು ದಿನಗಳ ಕಾಲ ಕಲಬುರಗಿ ಜಿಲ್ಲೆಯಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಮಳೆಯಿಂದ ಹಾಳಾದ ಬೆಳೆಗಳ ವಿಕ್ಷಣೆ ಮಾಡಲಿದ್ದಾರೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ್ ಹೇಳಿದ್ದಾರೆ.. ಸೆ 8 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ಜೇವರ್ಗಿ ಮತ್ತು ಅಫಜಲಪುರ ತಾಲೂಕಿನಲ್ಲಿ ಅತೀ ಹೆಚ್ಚು ಬೆಳೆಗಳು ಹಾಳಾಗಿದ್ದು, ಎರಡು ತಾಲೂಕಿನ ವಿವಿಧೆಡೆ ಮಳೆಯಿಂದ ಹಾಳಾದ ಬೆಳೆ ವಿಕ್ಷಣೆ ಮಾಡಲಿದ್ದಾರೆಂದು ಬಾಲರಾಜ್ ಗುತ್ತೇದಾರ್ ಹೇಳಿದ್ದಾರೆ..