Download Now Banner

This browser does not support the video element.

ದೇವದುರ್ಗ: ಏಕಾಏಕಿ ಕೃಷ್ಣಾ ಬಲದಂಡೆ ಕಾಲುವೆಗೆ ನೀರು ಹರಿಸಿದ್ದರಿಂದ ಗುಡದಿನ್ನಿ ಗ್ರಾಮದ ರೈತರ ತೊಗರಿ ಬೆಳೆ ಹಾನಿ ಆರೋಪ,ಅಸಮಾಧಾನ ವ್ಯಕ್ತಪಡಿಸಿದ ರೈತರು

Devadurga, Raichur | Sep 3, 2025
ಕೃಷ್ಣ ಬಲದಂಡೆ ಕಾಲುವೆಗೆ ಏಕೈಕ ನೀರು ಹರಿಸಿದ್ದರಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗುಡದಿನ್ನಿ ಗ್ರಾಮದ ರೈತರ ಬೆಳೆಗೆ ಕಾಲುವೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಬುಧವಾರ ಮಧ್ಯಾಹ್ನ ರೈತರು ಈ ಕುರಿತು ಮಾತನಾಡಿ, ಸರ್ವೆ ನಂಬರ್ 56 ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಕಾಲುವೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಪೂರ್ಣಗೊಳ್ಳದೆ ನೀರು ಹರಿಸಿದ್ದರಿಂದ 25 ಎಕರೆಯಲ್ಲಿ ಬೆಳೆದಿರುವ ತೊಗರಿ ಬೆಳೆ ಒಣಗಲಾರಂಬಿಸಿವೆ, ಇದಕ್ಕೆ ಅಧಿಕಾರಿಗಳೇ ಹೊಣೆ, ಸರಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Read More News
T & CPrivacy PolicyContact Us