ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮರೇಗುದ್ದಿ ಗ್ರಾಮದಲ್ಲಿ ದೇವರ ಬೆಳ್ಳಿ ಮುರ್ತಿ ಕಳ್ಳತನ ಮಾಡಿರುವ ಘಟನೆ ಜರುಗುದೆ.ಗ್ರಾಮದ ದಿಗಂಬೇಶ್ವರ ಸಂಸ್ಥಾನ ಮಠದಲ್ಲಿ ತಡ ರಾತ್ರಿ ಕಳ್ಳತನವಾಗಿದ್ದು ಸುಮಾರು ೮ ಕೆಜಿ ಬೆಳ್ಳಿಯ ಮೂರ್ತಿ ಇದಾಗಿದ್ದು, ಮೂರ್ತಿಗೆ ಬಂಗಾರದ ಕಣ್ಣು ಬೊಟ್ಟುಗಳು ಇದ್ದವು ಹಾಗೂ ದೇಣಿಗೆ ಪೆಟ್ಟಿಗೆಯನ್ನು ಕೂಡ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಸಿ.ಪಿ.ಐ ಮಲ್ಲಪ್ಪ ಮಡ್ಡಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.