Download Now Banner

This browser does not support the video element.

ಕೋಲಾರ: ನಗರದ ಅಮ್ಮವಾರಿಪೇಟೆ ಬಳಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಗಮಕ್ಕೆ ಸಾಕ್ಷಿಯಾದ ಗಣೇಶ ವಿಸರ್ಜನಾ ಮೆರವಣಿಗೆ

Kolar, Kolar | Aug 31, 2025
ವಿವಿಧತೆಯಲ್ಲಿ ಏಕತೆ ಸಾರುವ ದೇಶ ಭಾರತ. ಇಲ್ಲಿ ಎಲ್ಲಾ ಧರ್ಮೀಯರು ವಾಸಿಸುತ್ತಿದ್ದಾರೆ. ಪರಸ್ಪರ ಸಾಮರಸ್ಯ, ಬಾಂಧವ್ಯ, ಸಹೋದರತೆ ಇನ್ನು ಕೂಡ ಜೀವಂತವಾಗಿವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ನಗರದಲ್ಲಿ ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನೆ ಮೆರವಣಿಗೆ ವೇಳೆ ನಗರದ ಅಮ್ಮವಾರಿಪೇಟೆ ಬಳಿ ಭಾನುವಾರ 4 ಗಂಟೆಯಲ್ಲಿ ಮಜ್ಜಿಗೆ ವಿತರಿಸಿ ಸೌಹಾರ್ದತೆ ಮೆರೆದ ಮುಸ್ಲಿಂ ಸಮುದಾಯದ ಮುಖಂಡರು. ನಾವೆಲ್ಲ ಒಂದೇ ಎಂದು ದೇಶದ ಪರ ಹಾಗೂ ಗಣಪತಿಗೆ ಜೈಕಾರ ಕೂಗಿದರು. ಇದೇ ರೀತಿ ನಾವೆಲ್ಲರೂ ಒಂದಾಗಿ ಇರಬೇಕು ಯಾವುದೇ ಗಲಾಟೆ ಗಲಭೆ ಬೇಡ ಎಂದರು. ಈ ವೇಳೆ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು
Read More News
T & CPrivacy PolicyContact Us