Download Now Banner

This browser does not support the video element.

ರಾಯಚೂರು: ಕೃಷ್ಣಾನದಿಗೆ ಮತ್ತೆ ನೀರು; 20 ಗೇಟುಗಳ ಮುಖಾಂತರ 80 ಸಾವಿರ‌‌‌ ಕ್ಯೂಸೆಕ್ ನೀರು ರಿಲೀಸ್

Raichur, Raichur | Sep 6, 2025
ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಮತ್ತೆ 20 ಗೇಟುಗಳ ಮುಖಾಂತರ 80 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಆಲಮಟ್ಟಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಬಸವಸಾಗರ ಜಲಾಶಯಕ್ಕೆ 81 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ. ನಾರಾಯಣಪುರ ಜಲಾಶಯದಲ್ಲಿ ಸದ್ಯ 32.609 ಟಿಎಂಸಿ ನೀರು ಸಂಗ್ರಹವಿದೆ. ಹೆಚ್ಚುವರಿ ನೀರನ್ನು ಕೃಷ್ಣಾನದಿಗೆ ಹರಿಬಿಡಲಾಗಿದೆ ಎಂದು ಆಣೆಕಟ್ಟಿನ ಅಧಿಕಾರಿಗಳು ಸೆ.6 ರ ಶನಿವಾರ ಬೆಳಗ್ಗೆ 7 ಗಂಟೆಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More News
T & CPrivacy PolicyContact Us