Download Now Banner

This browser does not support the video element.

ರಾಯಚೂರು: ನಗರದ ಬಸ್ ನಿಲ್ದಾಣದ ಮೇಲ್ಛಾವಣಿಗೆ ಸಿಮೆಂಟ್ ಬದಲಿಗೆ ಸುಣ್ಣ ಬಣ್ಣ ಬಳಿದು ತೇಪೆ ಹಾಕುತ್ತಿರುವ ಆರೋಪ

Raichur, Raichur | Aug 26, 2025
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮೇಲ್ಛಾವಣಿಯ ಸಿಮೆಂಟ್ ಕಳಚಿಬಿದ್ದಿದ್ದ ಘಟನೆಗೆ ಸಂಬಂಧಿಸಿದಂತೆ ಆಗಸ್ಟ್ 26 ರ ಬೆಳಗ್ಗೆ 11 ಗಂಟೆಗೆ ಮೇಲ್ಛಾವಣಿಗೆ ಸುಣ್ಣಬಣ್ಣ ಬಳಿದು ತೇಪೆ ಹಾಕುವ ಕಾರ್ಯ ನಡೆದಿದ್ದು, ಕಳಪೆಯಾಗಿ ನಿರ್ವಹಿಸದೆ ಗುಣಮಟ್ಟ ಕಾಮಗಾರಿ ಕೈಗೊಳ್ಳಬೇಕು ಎಂದು ಪ್ರಯಾಣಿಕರಾದ ಪ್ರಹ್ಲಾದ್ ಆಪಾದಿಸಿದರು. ಈ ಕುರಿತು ಮಂಗಳವಾರ ಪ್ರಕಟಣೆ ನೀಡಿದ ಅವರು, ಈಚೆಗೆ ಕಟ್ಟಡದ ಮೇಲ್ಛಾವಣಿಯ ಸಿಮೆಂಟ್ ಕಳಚಿಬಿದ್ದ ಘಟನೆಯಿಂದ ಎಚ್ಚೆತ್ತುಕೊಂಡ ಅಧಿಕಾರಿ ಸಿಬ್ಬಂದಿಗಳು ತೇಪೆ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮೇಲ್ಛಾವಣಿಗೆ ಪ್ಲಾಸ್ಟರ್ ಹಾಕಬೇಕು. ಮತ್ತೆ ಕಳಚಿ ಬೀಳದಂತೆ ಗುಣಮಟ್ಟ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ
Read More News
T & CPrivacy PolicyContact Us