ಹಣದ ಆಮಿಷಕ್ಕೆ ಒಳಗಾಗದೆ ನಮ್ಮ ಸಂಸ್ಕೃತಿ, ಸಮಾಜ, ಧರ್ಮವನ್ನು ಬಿಡಬಾರದು. ನಿಮ್ಮ ನಿಮ್ಮ ಧರ್ಮದಲ್ಲಿ ಹೆಣ್ಣುಮಕ್ಕಳನ್ನು ಕೊಟ್ಟು ಸಂಬಂಧಗಳನ್ನು ಬೆಳೆಸಿ ಉಳಿಸಬೇಕು ಎಂದು ಚರ್ಯಾಶಿರೋಮಣಿ ಮುನಿಶ್ರಿ 108 ವಿಧಿತಸಾಗರಜಿ ಮಹಾರಾಜರು ಹೇಳಿದರು. ನಗರದ ಜೈನ ಮಂದಿರದಲ್ಲಿ ಭಾನುವಾರ ನಡೆದ 7ನೇ ದೀಕ್ಷಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರ್ ಮಾತನಾಡಿದರು.