ರಾಯಚೂರು ಮನೆ ಮಾಲೀಕರನ್ನು ಬೆದರಿಸಿ ಅಲ್ಮಾರಿಯ ಕೀಲಿಕೈ ಪಡೆದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಹೆಚ್ಚುವರಿ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಿಂಧನೂರು ಪೀಠಾಸೀನ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ಆರೋಪಿಗಳಾದ ಆಂದ್ರ ಪ್ರದೇಶ ಮೂಲದ ತೋಟ ರಾಮಕೃಷ್ಣಂ ರಾಜು, ಸದ್ದಲಕುಮಾರ ರಾಜ ಹಾಗೂ ಅರ್ಧಾಣಿ ಲಕ್ಷ್ಮಣ, ಸುಜಾತ ಅವರಿಗೆ 10 ವರ್ಷ ಕಾರಾಗೃಹ ಶಿಕ್ಷೆ ರೂ.1ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 2022ರ ನವೆಂಬರ್ 8ರಂದು ಬೆಳಗಿನ ಜಾವ ಆರೋಪಿಗಳು ಸಿಂಧನೂರಿನ ಗಾಂಧಿ ನಗರದಲ್ಲಿರುವ ಭಾಸ್ಕರರವರ ಮನೆಗೆ ನುಗ್ಗಿ ದರೋಡೆ ನಡೆಸಿದ್ದರು. ಕಬ್ಬಿಣದ ರಾಡಿನಿಂದ ಬಾಗಿಲು ಒಡೆದು ಒಳನುಗ್ಗಿದ ಆರೋಪಿತರು ಮನೆಯಲ್ಲಿ ಮಲಗಿದ್ದ ಕೃಷ್ಣ ಸಾಯಿ ಮತ್ತು