ಕಲಬುರಗಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಷ್ಟ್ 5 ರಂದು ಸಾರಿಗೆ ನೌಕರರಿಂದ ಮುಷ್ಕರ ನಡೆಸಲಾಗ್ತಿದ್ದು, ಒಂದು ವೇಳೆ ಮುಷ್ಕರ ಹತ್ತಿಕ್ಕಲು ಸರ್ಕಾರ ಯತ್ನಿಸಿದ್ರೆ ಸರ್ಕಾರವೇ ಭಸ್ಮವಾಗುತ್ತೆ ಅಂತಾ ಎಸ್ಟಿಇ ಯುನಿಯನ್ ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಧೋಳ್ಳೆ ಎಚ್ಚರಿಕೆ ನೀಡಿದ್ದಾರೆ.. ಆ4 ರಂದು ಸಂಜೆ 7 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ನಿಗದಿಯಂತೆ ನಾಳೆ ಇಡೀ ದಿನ ಮುಷ್ಕರ ನಡೆಯಲಿದೆ.. ಯಾವೊಂದು ಬಸ್ಗಳು ರಸ್ತೆಗಿಳಿಯಲ್ಲ. ಯಾವುದೇ ಗೊಂದಲಕ್ಕೊಳಗಾಗದೇ ನೌಕರರು ಮುಷ್ಕರ ದಲ್ಲಿ ಭಾಗಿ ಆಗಬೇಕೆಂದು ಮನವಿ ಮಾಡಿದರು.