Download Now Banner

This browser does not support the video element.

ಚಿಕ್ಕಮಗಳೂರು: ಮಾನವೀಯತೆಯನ್ನೇ ಮರೆತ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ.! ಹುಕ್ಕುಂದದಲ್ಲಿ ಬೆಳೆದು ನಿಂತಿದ್ದ ಕಾಫಿ ತೋಟ ಕಣ್ಣೆದುರೇ ನಾಶ.!

Chikkamagaluru, Chikkamagaluru | Aug 27, 2025
ಕಟಾವಿಗೆ ಬಂದ ಕಾಫಿ ಬೀಜ ಸಮೇತ ಕಾಫಿ ಗಿಡಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕಡಿದು ನಾಶ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಸಬಾ ಹೋಬಳಿ, ಉಕ್ಕುಂದ ಗ್ರಾಮದಲ್ಲಿ ನಡೆದಿದೆ. ಹಲವು ವರ್ಷಗಳಿಂದ ಪೋಷಣೆ ಮಾಡಿದ ಕಾಫಿ ಗಿಡಗಳು ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕಸಬಾ ಹೋಬಳಿ ಉಕ್ಕುಂದ ಗ್ರಾಮದ ನಿವಾಸಿಗಳಾದ ಷಣ್ಮುಖ, ರವಿಕುಮಾರ್, ಜಗದೀಶ್, ಮುಳ್ಳೇಶ್, ಪ್ರಕಾಶ್ ಅವರ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಫಿ ಗಿಡಗಳನ್ನು ಕಡಿದು ನಾಶ ಮಾಡಿದ್ದಾರೆ.
Read More News
T & CPrivacy PolicyContact Us