Download Now Banner

This browser does not support the video element.

ಲಿಂಗಸೂರು: ನೀರಲಕೇರಿ ಗ್ರಾಮದಲ್ಲಿ ಬಸ್ ಸಮಸ್ಯೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

Lingsugur, Raichur | Sep 3, 2025
ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲೂಕಿನ ನೀರಿನ ಕೇರಿ ಗ್ರಾಮದಲ್ಲಿ ಬಸ್ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಬುದುವಾರ ಬೆಳಗ್ಗೆ ಅನೇಕ ಜನ ವಿದ್ಯಾರ್ಥಿಗಳು ಆಗಮಿಸಿ, ಸರಿಯಾದ ಸಮಯಕ್ಕೆ ಬಸ್ ಬಾರದೆ ಇರುವುದರಿಂದ ಶಾಲಾ ಕಾಲೇಜಿಗೆ ಹೋಗಲು ಸಾಧ್ಯವಾಗದೆ ಪರದಾಟವನ್ನ ನಡೆಸಿ, ಬೇಸತ್ತ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆಯನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳ ಮುಖಂಡರು ಕೂಡ ಭಾಗವಹಿಸಿ ಬಸ್ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.
Read More News
T & CPrivacy PolicyContact Us