Download Now Banner

This browser does not support the video element.

ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ಟ್ರಾಫಿಕ್ ಪೊಲೀಸ್ ಮತ್ತು ವಾಹನ ಸವಾರನ ನಡುವೆ ಗಲಾಟೆ

Chikkaballapura, Chikkaballapur | Aug 28, 2025
ಚಿಕ್ಕಬಳ್ಳಾಪುರ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ದಾಟುವ ವಿಚಾರವಾಗಿ ವಾಹನ ಸವಾರ ಮತ್ತು ಟ್ರಾಫಿಕ್ ಪೊಲೀಸರ ನಡುವೆ ಗಲಾಟೆ ನಡೆದು ಪರಸ್ಪರ ತಳ್ಳಾಟ ನಡೆದಿದೆ. ನಗರದ ನಿವಾಸಿ ವರದಾರವರು ತಮ್ಮ ಬೈಕಿನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಗಳು ಬೆಳಗದ ಹಿನ್ನೆಲೆಯಲ್ಲಿ ನಗರದ ಶಿಡ್ಲಘಟ್ಟ ಆ ವೃತ್ತವನ್ನು ದಾಟಿ ಹೋಗಿದ್ದಾರೆ. ಇದನ್ನು ಗಮನಿಸಿದ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಬಸಪ್ಪ ಲಂಬಾಣಿಯವರು ಅವರನ್ನು ಅಡ್ಡಗಟ್ಟಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿ ಪರಿಣಮಿಸಿದೆ. ನಂತರ ಸ್ಥಳೀಯರು ಮತ್ತು ಮತ್ತಷ್ಟು ಪೊಲೀಸರು ಸ್ಥಳಕ್ಕೆ ಆಗಮಿಸಿ ಗಲಾಟೆಯನ್ನು ಬಿಡಿಸಿದ್ದಾರೆ.
Read More News
T & CPrivacy PolicyContact Us