Download Now Banner

This browser does not support the video element.

ಹನೂರು: ಧರ್ಮಸ್ಥಳ ಕೇಸ್- ಉನ್ನತ ಮಟ್ಟದ ತನಿಖೆಗೆ ಮಲೆಮಹದೇಶ್ವರ ಬೆಟ್ಟದ ಸಾಲೂರು ಶ್ರೀ ಒತ್ತಾಯ

Hanur, Chamarajnagar | Sep 4, 2025
ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂ ಧಾರ್ಮಿಕ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದ್ದು ಇದರ ವಿರುಧ್ಧ ಅವಹೇಳನ ಮಾಡಬಾರದು ಹಾಗೂ ಅಪಪ್ರಚಾರ ಮಾಡಬಾರದು ಎಂಬುದು ಮಠಾಧೀಶರ ನಿಲುವಾಗಿದೆ ಎಂದು ಸಾಲೂರು ಮಠದ ಪೀಠಾಧಿಪತಿ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಮಧ್ಯಾಹ್ನ ಈ ಕುರಿತು ಅವರು ಮಾತನಾಡಿ, ಸೆ.3 ರ ಬುಧವಾರದಂದು ವಿವಿಧ ಮಠಾಧೀಶರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಅಪಾರ ಶ್ರದ್ಧಾಭಕ್ತಿ ನಂಬಿಕೆಯನ್ನು ಇರಿಸಿಕೊಂಡಿದ್ದು, ಇತ್ತೀಚಿನ ಕೆಲವು ಅನಪೇಕ್ಷಿತ ವಿದ್ಯಮಾನಗಳು ಭಕ್ತರ ಭಕ್ತಿ ಭಾವನೆಗಳಿಗೆ ಅಘಾತವನ್ನುಂಟುಮಾಡಿದೆ ಎಂದರು.
Read More News
T & CPrivacy PolicyContact Us