Download Now Banner

This browser does not support the video element.

ನಾಗಮಂಗಲ: ಮೂರು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 3 ಆರೋಪಿಗಳನ್ನ ಬಂಧಿಸಿದ ನಾಗಮಂಗಲ ಪೊಲೀಸರು; ₹15.70 ಲಕ್ಷ ಮೌಲ್ಯದ ಚಿನ್ನಾಭರಣ ವಶ

Nagamangala, Mandya | Aug 22, 2025
ಜಿಲ್ಲೆಯ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಸರಗಳ್ಳನತ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಸುಮಾರು 5.70 ಲಕ್ಷ ಮೌಲ್ಯದ 100 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಲೋನ್ ರಿಕವರಿ ಕೆಲಸ ಮಾಡಿಕೊಂಡಿದ್ದ, ಮೂಲತಃ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಅಡ್ಡರಸ್ತೆಯ ಕುಮಾರ ಎಸ್ ಅಲಿಯಾಸ್ ಕಸ್ಟಡಿ (26), ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಮನಗರ ಜಿಲ್ಲೆ ಎಸ್.ಎಂ.ಹಳ್ಳಿಯ ನಾಗರಾಜ ಅಲಿಯಾಸ್‌ ಸತ್ತಾರ್ (27), ಹಾಗೂ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಮನಗರ ಹೊಸದೊಡ್ಡಿ ಗ್ರಾಮದ ನರಸಿಂಹ (25) ಬಂಧಿತ ಆರೋಪಿಗಳು.
Read More News
T & CPrivacy PolicyContact Us