ಪ್ರಕರಣದಲ್ಲಿ ಆರೋಪಿಯಾದ ದೇವರಾಜ್ (49 ) ವಿಟ್ಲ ಬಂಟ್ವಾಳ ತಾಲೂಕು ಎಂಬಾತನು ತಲೆಮರೆಸಿಕೊಂಡಿದ್ದಾಗಿ ದೋಷಾರೋಪಣ. ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಲಾಗಿದ್ದು. ಆತನು ಕಳೆದ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು LPC ವಾರೆಂಟ್ ನಂ: 15/2018 ರಂತೆ ವಾರೆಂಟ್ ಹೊರಡಿಸಿರುವುದಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ ಆತನು ಶ್ರೀ ತಿರುಪತಿ ತಿರುಮಲ ದೇವಸ್ಥಾನದ ಬೆಟ್ಟದಲ್ಲಿ ವಾಹನ ಪಾರ್ಕಿಂಗ್ ಕೆಲಸ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು. ನಂತರ ಅಲ್ಲಿಗೆ ಹೋಗಿ ದಿನಾಂಕ:- 5/9/2025 ರಂದು ದಸ್ತಗಿರಿ ಮಾಡಿ ದಿನಾಂಕ 6-9-2025 ಮಾನ್ಯ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ನೀಡಿರುವುದಾಗಿದೆ.