ಜೊಯಿಡಾ : ತಾಲೂಕಿನಲ್ಲಿ ಹುಲಿ ಸ್ಥಳಾಂತರ ಯೋಜನೆಯಲ್ಲಿ ಕೋಟ್ಯಂತರ ರೂ ಅವ್ಯವಹಾರದ ಕುರಿತಂತೆ ಕೇಂದ್ರ ಸರಕಾರ ತನಿಖೆಗೆ ಆದೇಶಿಸಿರುವುದನ್ನು ಜೋಯಿಡಾ ತಾಲೂಕು ಕುಣಬಿ ಸಮಾಜದ ಮಾಜಿ ಅಧ್ಯಕ್ಷರಾದ ಅಜಿತ ಮಿರಾಶಿ ಅವರು ಸ್ವಾಗತಿಸಿ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ಇಂದು ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಜೋಯಿಡಾದಲ್ಲಿ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡುತ್ತಿದ್ದರು.