ಇತ್ತೀಚಿಗೆ ಭಾರೀ ಪ್ರಮಾಣದಲ್ಲಿ ವೈರಲ್ ಆದ ಕಟೀಲಿನ ಪಡಿತರ ಅಂಗಡಿಯ ಗೋಣಿ ಚೀಲದ ಸಮಸ್ಯೆಯನ್ನು ಮತ್ತು ಪಡಿತರ ಅಂಗಡಿಯಲ್ಲಿ ಏನೇನು ನಡೆಯಿತು ಎನ್ನುವುದರ ಕುರಿತು ಸತೀಶ್ ಕಟೀಲ್ ಸ್ಪಷ್ಟತೆ ನೀಡಿದರು . ಅವರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಟೀಲು ಪಡಿತರ ಅಂಗಡಿಯನ್ನು ಹಲವು ವರ್ಷಗಳಿಂದ ಮಂಜುನಾಥ ನಾಯಕ್ ಎಂಬುವವರು ಕಟೀಲು ಸಮೀಪ ನ್ಯಾಯಬೆಲೆ ಅಂಗಡಿಮೂಲಕ ಸರಕಾರದಿಂದ ಸಿಗುವ ರೇಷನನ್ನು ನೀಡುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದರು, ಆದರೆ ಇತ್ತೀಚಿನ ಕೆಲವರ್ಷಗಳಿಂದ ಈ ರೇಷನ್ ಅಂಗಡಿಯಿಂದ ಹಲವಾರು ಸಮಸ್ಯೆಗಳು ಉದ್ಭವವಾಗಿದೆ.