ಗುಂಡ್ಲುಪೇಟೆ ತಾಲೂಕಿನ ಮದ್ದೂರು ವಲಯ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ತನಕವೂ ಹುಲಿ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಸಿಬ್ಬಂದಿ ತೀವ್ರವಾಗಿ ನಡೆಸಿದರೂ ಹಳ್ಳಕೊಳ್ಳ, ಬಾಳೆ ತೋಟದಲ್ಲಿ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದರು ಸಹ ಹುಲಿ ಕಾಣಿಸಿಕೊಂಡಿಲ್ಲ. ಮದ್ದೂರು ವಲಯ ವ್ಯಾಪ್ತಿಯ ಚನ್ನಮಲ್ಲಿಪುರ, ಮದ್ದಯ್ಯನಹುಂಡಿ, ಬೇರಂಬಾಡಿ ಸುತ್ತಮುತ್ತಲು ಸಾಕಾನೆ ರೋಹಿತ್ ಬಳಕೆ ಮಾಡಿಕೊಂಡು 3ನೇ ದಿನವೂ ಬೆಳಗ್ಗೆಯಿಂದ ಸಂಜೆವರೆಗೆ ಕೂಂಬಿಂಗ್ ನಡೆಸಿದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ. ಕೇವಲ ಹುಲಿಯ ಹಳೇ ಹೆಜ್ಜೆ ಗುರುತು ಮಾತ್ರ ಕಾಣಸಿಕ್ಕಿದ್ದು, 8 ಕ್ಯಾಮಾರಾಗಳಲ್ಲಿ ಹುಲಿಯ ಚಲನವಲನ ಪತ್ತೆಯಾಗಿಲ್ಲ ಎಂದು ಡಿಆರ್ಎಫ್ಓ ರವಿ ಮಾಹಿತಿ ನೀಡಿದ್ದಾರೆ.