Download Now Banner

This browser does not support the video element.

ಶೋರಾಪುರ: ದೇವರಗೋನಾಲ ಗ್ರಾಮದಲ್ಲಿ ರಾಜ್ಯಮಟ್ಟದ ಖೋಖೋ ತರಬೇತಿ ಶಿಬಿರದ ಸಮಾರೋಪ

Shorapur, Yadgir | Sep 30, 2025
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಖೋಖೋ ಸಂಸ್ಥೆ ,ಯಾದಗಿರಿ ಜಿಲ್ಲಾ ಖೋಖೋ ಸಂಸ್ಥೆ ಹಾಗೂ ಮೌನೇಶ್ವರ ಖೋಖೋ ಸಂಸ್ಥೆಯ ದೇವರಗೋನಾಲ ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಸಬ್ ಜೂನಿಯರ್ ಬಾಲಕ ಬಾಲಕಿಯರ 10 ದಿನಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಸೋಮವಾರ ರಾತ್ರಿ ನಡೆಯಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಕ್ರೀಡಾಪಟುಗಳು ತರಬೇತಿ ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮಣ್ಣ ದ ದೀವಳಗುಡ್ಡ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ವೆಂಕಟೇಶ ಬೇಟೆಗಾರ, ಚಂದ್ರಶೇಖರ ವೈದ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Read More News
T & CPrivacy PolicyContact Us