Download Now Banner

This browser does not support the video element.

ಜಮಖಂಡಿ: ಕುಂಬಾರಹಳ್ಳ ಗ್ರಾಮದ ನದಿಯಲ್ಲಿ ಮತ್ತೋರ್ವ ರೈತ ನೀರುಪಾಲು, ಪಂಪ್‌ಸೆಟ್ ತರಲು ಹೋದಾಗ ದುರ್ಘಟನೆ

Jamkhandi, Bagalkot | Aug 23, 2025
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹಕ್ಕೆ ಮತ್ತೋರ್ವ ರೈತ ಬಲಿಯಾಗಿದ್ದು,ಪ್ರವಾಹದಿಂದ ತೀರಿಹೋದವರ ಸಂಖ್ಯೆ ಎರಡಕ್ಕೆ ಏರಿದೆ.ಹೌದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ನದಿಯ ದಂಡೆಯಲ್ಲಿದ್ದ ಪಂಪಸೆಟ್ ತೆಗೆಯಲು ಹೋಗಿ ಸಂಗಪ್ಪ ಮರನೂರು(26) ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾಗಿ ಮಾಹಿತಿ ಲಭ್ಯವಾಗಿದೆ.ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದ ಪರಿಣಾಮವಾಗಿ ಕೃಷ್ಣ ನದಿಗೆ ಅಪಾರ ಪ್ರಮಾಣದ‌ ನೀರು ಹರಿದು ಬರುತ್ತಿದೆ.ನದಿಯ ನೀರಿನ ರಭಸಕ್ಕೆ ಪಂಪ ಸೆಟ್ ಕೊಚ್ಚಿ ಹೋಗಬಾರದೆಂದು ರೈತ ಸಂಗಪ್ಪ ಅದನ್ನು ತೆಗೆಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us