Download Now Banner

This browser does not support the video element.

ಕುಣಿಗಲ್: ಭಾನು ಮುಸ್ತಾಕ್ ಆಹ್ವಾನ ವಿರೋಧ ಮಹಿಳಾ ವಿರೋಧಿ ಮನೋಭಾವ : ಮಾರ್ಕೋನಹಳ್ಳಿಯಲ್ಲಿಶಾಸಕ ಡಾ. ಎಚ್.ಡಿ. ರಂಗನಾಥ್

Kunigal, Tumakuru | Aug 30, 2025
ಮಾರ್ಕೋನಹಳ್ಳಿ ಜಲಾಶಯದಿಂದ ಅಚ್ಚುಕಟ್ಟುದಾರರ ರಾಗಿ ಬೆಳೆಗಳಿಗೆ ನೀರು ಹರಿಸುವುದಕ್ಕೆ ಶನಿವಾರ ಬೆಳಗ್ಗೆ 11 ಗಂಟೆಯಲ್ಲಿ ಚಾಲನೆ ನೀಡಿದ ನಂತರ ಮಾತನಾಡಿದ ಶಾಸಕ ಡಾ. ಎಚ್.ಡಿ. ರಂಗನಾಥ್, ಅಂತರಾಷ್ಟ್ರೀಯ ಮಟ್ಟದ ಬುಕರ್ ಪ್ರಶಸ್ತಿ ಪುರಸ್ಕೃತ ಭಾನು ಮುಸ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದನ್ನು ವಿರೋಧಿಸುತ್ತಿರುವ ಬಿಜೆಪಿಗರ ನಿಲುವನ್ನು ತೀವ್ರವಾಗಿ ಟೀಕಿಸಿದರು. “ಮಹಿಳೆಯರ ಸಾಧನೆಯನ್ನು ವಿರೋಧಿಸುವುದು ಮಹಿಳಾ ವಿರೋಧಿ ಮನೋಭಾವವನ್ನು ಬಿಂಬಿಸುತ್ತದೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಲು ಹೊರಟಿರುವ ಬಿಜೆಪಿಗರ ಬಣ್ಣವನ್ನು ಜನತೆ ಹಿಂದಿನ ಚುನಾವಣೆಗಳಲ್ಲೇ ಬಯಲು ಮಾಡಿದ್ದಾರೆ. ತಾಯಿ ಚಾಮುಂಡೇಶ್ವರಿ ಎಲ್ಲ ಜಾತಿ, ಎಲ್ಲ ಧರ್ಮಗಳವರನ್ನೂ ತನ್ನೊಂದಿಗೆ ಕರೆದುಕೊಂಡು ಹೋಗುತ್ತಾಳೆ.
Read More News
T & CPrivacy PolicyContact Us