ತೋಟದ ಮನೆ ಮೇಲೆ ಕಾಡಾನೆಗಳು ದಾಳಿ ಮಾಡಿರುವ ಘಟನೆ ನಡೆದಿದೆ. ಕನಕಪುರ ತಾಲೂಕಿನ ಕುನೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಹೊರ ವಲಯದ ತೋಟದಲ್ಲಿ ಮನೆಯನ್ನ ನಿರ್ಮಾಣ ಮಾಡಲಾಗಿತ್ತು. ಈ ಮನೆಯಲ್ಲಿ ದವಸ ಧಾನ್ಯಗಳನ್ನು ಶೇಖರಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆನೆಗಳು ಮನೆಯ ಗೋಡೆ ಕೆಡಗಿವೆ. ಇದಾದನಂತರ ಭತ್ತದ ಗದ್ದೆಯನ್ನ ಸಹ ನಾಶ ಪಡಿಸಿವೆ.