Download Now Banner

This browser does not support the video element.

ಮಳವಳ್ಳಿ: ಚರಂಡಿ ನೀರನ್ನು ಜಮೀನಿಗೆ ಹರಿಸಿದ್ದನ್ನು ಪ್ರಶ್ನಿಸಿದ ಹಣಕೊಳ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತನ ಮೇಲೆ ಗ್ರಾ ಪಂ ಸದಸ್ಯ ಹಲ್ಲೆ

Malavalli, Mandya | Sep 5, 2025
ಚರಂಡಿ ನೀರನ್ನು ಜಮೀನಿಗೆ ಹರಿಸಿದ್ದನ್ನು ಪ್ರಶ್ನಿಸಿದ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರನ ಮೇಲೆ ಗ್ರಾಮ ಪಂಚಾಯಿತಿ ಸದಸ್ಯನೊರ್ವ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಈ ಬಗ್ಗೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪೊಲೀಸರು ದೂರು ದಾಖಲಿಸಿಕೊಂಡು ಎಫ್ಐಆರ್ ಮಾಡಿದ್ದಾರೆ. ಮಳವಳ್ಳಿ ತಾಲ್ಲೂಕು ಕಿರುಗಾವಲು ಹೋಬಳಿಯ ಹಣಕೊಳ ಗ್ರಾಮದ ಕೆ.ಆರ್.ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಹೆಚ್.ಎಂ ಹಲ್ಲೆಗೆ ಒಳಗಾದವರು, ಸುಜ್ಜಲೂರು ಗ್ರಾಮ ಪಂಚಾಯಿತಿ ಸದಸ್ಯ ನಂಜಯ್ಯ ಮತ್ತು ಅವರ ಕುಟುಂಬದ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ಘಟನೆಯಿಂದ ಗಾಯಗೊಂಡ ಮಹದೇವಪ್ಪ ಸ್ವಾಮಿ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Read More News
T & CPrivacy PolicyContact Us