Download Now Banner

This browser does not support the video element.

ಶಿರಸಿ: ದನಗನಹಳ್ಳಿಯಲ್ಲಿ ಒಣಗಿಸಲು ಹಾಕಿದ್ದ ಜೋಳ ಭಾರಿ ಮಳೆಗೆ ಸಂಪೂರ್ಣ ನಾಶ: 2 ಲಕ್ಷ ರೂ. ಹಾನಿ

Sirsi, Uttara Kannada | Jun 17, 2025
ಶಿರಸಿ ತಾಲೂಕಿನ ದನಗನಹಳ್ಳಿಯ ರೈತ ವಿಜಯ ದಳವಿ ಅವರು ಸುಮಾರು 100 ಕ್ವಿಂಟಾಲ್ ನಷ್ಟು ಜೋಳದ ಬೆಳೆ ಒಣಗಿಸಲು ಹಾಕಿದ್ದದರು. ಭಾರಿ ಮಳೆಗೆ ಜೋಳ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ಮಂಗಳವಾರ ಸಂಜೆ 6ಕ್ಕೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಇದರಿಂದ ರೈತರ ವಿಜಯ ಅವರಿಗೆ ಸುಮಾರು ಎರಡು ಲಕ್ಷ ರೂ. ಹಾನಿಯಾಗಿದೆ. ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ವಿವಿಧ ಕಡೆಗಳಲ್ಲಿ ಮಳೆ ನೀರು ತುಂಬಿದೆ. ಇದರಿಂದ ಕೃಷಿ ಕ್ಷೇತ್ರಕ್ಕೂ ತೊಂದರೆಯಾಗಿದ್ದು ರೈತರು ಹಾನಿ ಅನುಭವಿಸುವಂತಾಗಿದೆ.
Read More News
T & CPrivacy PolicyContact Us