ಚಾಮರಾಜನಗರ ತಾಕೂಕಿನ ಬಂಡಿಗೆರೆ ಗ್ರಾಮದ ಉಪ್ಪಾರ ಸಮುದಾಯದ ಭವನದಲ್ಲಿ ಹರದನಹಳ್ಳಿ ಹೋಬಳಿ ಮಟ್ಟದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರಿಗೆ ಅನುಕೂಲವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದಿದ್ದು ಅನೇಕ ಸರ್ಕಾರಗಳು ಆಳ್ವಿಕೆ ನಡೆಸಿವೆ. ಈ ನಡುವೆ ಸರ್ಕಾರಗಳು ಬಡವರು, ಶೋಷಿತರು, ಅಲ್ಪಸಂಖ್ಯಾತರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು