Download Now Banner

This browser does not support the video element.

ಬಸವಕಲ್ಯಾಣ: ಕಲಬುರ್ಗಿಯ ಸಾಹಿತಿ ಎಸ್.ಎಂ.ಹಿರೇಮಠಗೆ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಗೆ ಆಯ್ಕೆ: ಹಾರಕೂಡನಲ್ಲಿ ಶ್ರೀ ಡಾ: ಚೆನ್ನವೀರ ಶಿವಾಚಾರ್ಯರ ಘೋಷಣೆ

Basavakalyan, Bidar | Sep 3, 2025
ಸಾಹಿತಿ ಎಸ್. ಎಂ. ಹಿರೇಮಠ ಅವರಿಗೆ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿ ಬಸವಕಲ್ಯಾಣ: ಶ್ರೀ ಗುರುಲಿಂಗ ಶಿವಾಚಾರ್ಯರ 56ನೇ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಚನ್ನ ರೇಣುಕ ಬಸವ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು 39ನೇ ಅನುಭಾವ ಪ್ರಚಾರ ಉಪನ್ಯಾಸಮಾಲೆಯ ಕಾರ್ಯಕ್ರಮ ಪ್ರಯುಕ್ತ ಬುಧವಾರ ದಿನಾಂಕ 3-9-2025 ರಂದು ಬೆಳಗ್ಗೆ 10 ಗಂಟೆಗೆ ಹಾರಕೂಡ ಶ್ರೀಮಠದಲ್ಲಿ ಪತ್ರಿಕಾಗೋಷ್ಠಿ ಜರುಗಿತು. ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಹಾರಕೂಡ ಶ್ರೀಮಠದಿಂದ ಕೊಡಮಾಡುವ ರಾಷ್ಟ್ರಮಟ್ಟದ ಚೆನ್ನ ರೇಣುಕ ಬಸವ ಪ್ರಶಸ್ತಿ ಯನ್ನು ಈ ವರ್ಷ ಖ್ಯಾತ ಸಾಹಿತಿಗಳಾದ "ಎಸ್ ಎಂ ಹಿರೇಮಠ" ಅವರಿಗೆ 1 ಲಕ್ಷ ನಗದು, ಎರಡು ತೊಲೆ ಚಿನ್ನದ ಪದ ಒಳಗೊಂಡಿದೆ ಎಂದರು
Read More News
T & CPrivacy PolicyContact Us