ಆಳಂದ ತಾಲೂಕಿನ ಮುನ್ನಳ್ಳಿಯಲ್ಲಿ ಅತಿವೃಷ್ಠಿಯಿಂದ ಉದ್ದು, ತೊಗರಿ ಸೇರಿ ವಿವಿಧ ಬೆಳೆಗಳು ಹಾನಿಗೊಳಗಾದ ಪ್ರದೇಶಕ್ಕೆ ಜೆಡಿಎಸ್ ಮುಖಂಡೆ ಮಹೇಶ್ವರಿ ವಾಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ತಲಾ ಎಕ್ಕರೆಗೆ ₹20,000 ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು. ಸ್ಥಳಿಯ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ರೈತರ ಪರ ನಿಲ್ಲುವಂತೆ ಮಹೇಶ್ವರಿ ಒತ್ತಾಯಿಸಿದರು.