ಬಸವತತ್ವ ಮೈಗೂಡಿಸಿಕೊಂಡರೆ ಜೀವನ ಸಾರ್ಥಕಗೊಳ್ಳಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಬಿ ಪಾಟೀಲ ಅಭಿಪ್ರಾಯಪಟ್ಟರು. ಪಟ್ಟಣದ ಸೊಹೆಲ್ ಸಭಾಂಗಣದಲ್ಲಿ ಬಸವಸೇವಾ ಪ್ರತಿಷ್ಠಾನ, ಶರಣ ಸಾಹಿತ್ಯ ಪರಿಷತ್ತು, ಬಸವೇಶ್ವರ ಮಹಿಳಾ ಸೇವಾ ಸಂಘದಲ್ಲಿ ಮಂಗಳವಾರ ರಾತ್ರಿ 8:30ಕ್ಕೆ ಏರ್ಪಡಿಸಿದ್ದ ವಚನ ಶ್ರವಣ ಸಮಾಪ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಸವ ಚಿಂತಕ ಅಶೋಕ ಹಂಚೆಲಿ ಅದ್ಭುತವಾಗಿ ಉಪನ್ಯಾಸ ಮಂಡಿಸಿದರು.