ಪಟ್ಟಣದಲ್ಲಿ 9 ದಿನಗಳ ಕಾಲ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ಗುರುವಾರ ಸಂಜೆ 4ಕ್ಕೆ ಸಂಭ್ರಮದ ತೆರೆಕಂಡಿತು. ಈ ವೇಳೆ ವಿವಿಧ ಗಣೇಶ ಪ್ರತಿಷ್ಠಾಪನ ಸಮಿತಿಗಳ ಪ್ರತಿಷ್ಠಾಪಿಸಿದ್ದ ಮೂರ್ತಿಗಳ ಜೊತೆಗೆ ಅತ್ಯಾಕರ್ಷಕ ವಾದ್ಯ ಬೃಂದಗಳು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಇವಳೆ ವಿಶೇಷವಾಗಿ ಶಿವಯೋಗೀಶ್ವರ ವಿದ್ಯಾಲಯದ ಸಮವಸ್ತ್ರ ಧಾರಿ ಮಕ್ಕಳು ಪ್ರದರ್ಶಿಸಲ್ಪಟ್ಟ ವಾದ್ಯ ಸಮೇತದ ನೃತ್ಯ ಮನಸೂರಿಗೊಂಡಿತು.