Download Now Banner

This browser does not support the video element.

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿಉಭಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಚೌತಿ ಆರಾಧನೆ

Sirsi, Uttara Kannada | Aug 27, 2025
ಶಿರಸಿ : ತಾಲೂಕಿನ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಬುಧವಾರ ಆಚರಿಸಲಾಯಿತು. ಉಭಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಗಣಹವನ ನಡೆಯಿತು. ಎರಡು ಮಣ್ಣಿನ ಗಣಪತಿ‌ ಮೂರ್ತಿಗಳನ್ನು ಪೂಜಿಸಿ, ಆರಾಧಿಸಲಾಯಿತು. ಶ್ರೀ ಮಠದ ಆರಾಧ್ಯ ದೇವರುಗಳಲ್ಲಿ ಒಂದಾದ ರತ್ನಗರ್ಭ ಗಣಪತಿಗೆ ಕಲ್ಪೋಕ್ತ ಪೂಜೆ, ಮಹಾಮಂಗಳಾರತಿಯನ್ನೂ ಬುಧವಾರ ಮಧ್ಯಾಹ್ನ 1.00 ಗಂಟೆ ಸುಮಾರಿಗೆ ನೆರವೇರಿಸಿದರು.
Read More News
T & CPrivacy PolicyContact Us