Download Now Banner

This browser does not support the video element.

ಹಾವೇರಿ: ಸೆ.14ರಂದು ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ, ದಿನವಿಡೀ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಕ್ತರಿಗೆ ಕರೆ; ನಗರದಲ್ಲಿ ಬಸವಶಾಂತಲಿಂಗ ಶ್ರೀ

Haveri, Haveri | Sep 10, 2025
ನಗರದ ರಜನಿ ಕನ್ವೆನ್ನಲ್ ಹಾಲ್‌ ನಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಹಾವೇರಿಯ ಬಸವ ಸಂಸ್ಕೃತಿ ಅಭಿಯಾನ ಸಮಿತಿ ವತಿಯಿಂದ ಸೆ.14ರಂದು ದಿನವಿಡೀ ಬಸವ ಸಂಸ್ಕೃತಿ ಅಭಿಯಾನ' ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಜಗಜ್ಯೋತಿ ಬಸವೇಶ್ವರರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷ ಗತಿಸಿದೆ. ಈ ಹಿನ್ನೆಲೆ ಯುವ ಜನತೆಗೆ, ಮಕ್ಕಳಿಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಲಿಂಗಾಯತ ಮಠಗಳು ಹಾಗೂ ವಿವಿಧ ಬಸವಪರ ಸಮಿತಿಗಳು ಬಸವ ಸಂಸ್ಕೃತಿ ಅಭಿಯಾನವನ್ನು ರಾಜಾದ್ಯಂತ ನಡೆಸುತ್ತಿವೆ ಎಂದರು.
Read More News
T & CPrivacy PolicyContact Us