ಕಾಡುಹಂದಿಗಳ ಹಾವಳಿಗೆ ಮೆಕ್ಕೆಜೋಳ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಕಾಳಿಕಾಂಬ ಕಾಲೋನಿಯಲ್ಲಿ ಶನಿವಾರ ನಡೆದಿದೆ. ಕಾಳಿಕಾಂಬ ಕಾಲೋನಿ ಗ್ರಾಮದ ರೈತ ನಟೇಶ್ ಎಂಬವರ ಜಮೀನಿಗೆ ಕಾಡುಹಂದಿಗಳು ಲಗ್ಗೆ ಇಟ್ಟು ಒಂದೂವರೆ ಎಕರೆಯಷ್ಟು ಮೆಕ್ಕೆಜೋಳ ಬೆಳೆಯನ್ನು ತಿಂದು, ತುಳಿದು ನಾಶ ಮಾಡಿದೆ. ಈ ಸಂಬಂಧ ರೈತ ವೀಡಿಯೋ ಹರಿಬಿಟ್ಟು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.