Download Now Banner

This browser does not support the video element.

ಚಾಮರಾಜನಗರ: ಕಾಳಿಕಾಂಬ ಕಾಲೋನಿಯಲ್ಲಿ ಮಧ್ಯಾಹ್ನದ ಹೊತ್ತಲ್ಲೇ ಕಾಡುಹಂದಿ ಹಾವಳಿ; ಮೆಕ್ಕೆಜೋಳ‌ ನಾಶ

Chamarajanagar, Chamarajnagar | Sep 6, 2025
ಕಾಡುಹಂದಿಗಳ ಹಾವಳಿಗೆ ಮೆಕ್ಕೆಜೋಳ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಕಾಳಿಕಾಂಬ ಕಾಲೋನಿಯಲ್ಲಿ ಶನಿವಾರ ನಡೆದಿದೆ. ಕಾಳಿಕಾಂಬ ಕಾಲೋನಿ ಗ್ರಾಮದ ರೈತ ನಟೇಶ್ ಎಂಬವರ ಜಮೀನಿಗೆ ಕಾಡುಹಂದಿಗಳು ಲಗ್ಗೆ ಇಟ್ಟು ಒಂದೂವರೆ ಎಕರೆಯಷ್ಟು ಮೆಕ್ಕೆಜೋಳ ಬೆಳೆಯನ್ನು ತಿಂದು, ತುಳಿದು ನಾಶ ಮಾಡಿದೆ. ಈ ಸಂಬಂಧ ರೈತ ವೀಡಿಯೋ ಹರಿಬಿಟ್ಟು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.
Read More News
T & CPrivacy PolicyContact Us