ಕೋಲಾರ ತಾಲೂಕು ಹುತ್ತೂರು ಹೋಬಳಿಯ ಶಿಳ್ಳಂಗೆರೆ,ಅಬ್ಬಣಿ, ಕೋಟಿಗಾನಹಳ್ಳಿ, ಅರಟಿ ಗ್ರಾಮಗಳಲ್ಲಿ ಆಗಸ್ಟ್ 30ರಂದು ಸರ್ವೇ ಮಾಡಲಾಗುವುದು ಎಂದು ತಾಲೂಕು ತಹಸಿಲ್ದಾರ್ ನಯನ ತಿಳಿಸಿದ್ದಾರೆ ಗುರುವಾರ ಸಂಜೆ 5:30ರ ಸಮಯದಲ್ಲಿ ಸೂಕ್ತ ತನಿಖೆಗೆ ಆಗ್ರಹಿಸಿ ರೈತ ಮುಖಂಡರು ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡಿರುವ ಅವರು ಈಗಾಗಲೇ ಅರಣ್ಯ ಇಲಾಖೆಗೆ ಆಗುವ ರೈತರಿಗೆ ಜಮೀನು ವಿವಾದಗಳಿದ್ದು ಈ ಸಂಬಂಧ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆಗಸ್ಟ್ 30ರಂದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೆ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದ್ದಾರೆ