ಈದ್ ಮಿಲಾದ್ ಹಬ್ಬ ಹಾಗೂ ಗಣೇಶ ಹಬ್ಬದ ಪ್ರಯುಕ್ತ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್ಡಿ ಅವರ ನೇತೃತ್ವದಲ್ಲಿ ಬೃಹತ್ ರೂಟ್ಮಾರ್ಚ್ ಜರುಗಿತು. ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಪೊಲೀಸ್ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು. ಈ ರೂಟ್ ಮಾರ್ಚ್ ಕಲಬುರಗಿ ಕೋಟೆ ಪ್ರದೇಶದಿಂದ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಜನರಲ್ಲಿ ಭದ್ರತೆ ಮತ್ತು ವಿಶ್ವಾಸ ಮೂಡಿಸುವ ಜೊತೆಗೆ ಹಬ್ಬವನ್ನು ಶಾಂತಿ, ಸೌಹಾರ್ದ ಹಾಗೂ ಸಹಕಾರದ ಮನೋಭಾವದಲ್ಲಿ ಆಚರಿಸಲು ಕರೆ ನೀಡಲಾಯಿತು. ಬುಧವಾರ 5 ಗಂಟೆಯಿಂದ 7 ಗಂಟೆವರೆಗೆ ರೂಟ್ ಮಾರ್ಚ್ ನಡೆಯಿತು....