Download Now Banner

This browser does not support the video element.

ಬೆಂಗಳೂರು ಉತ್ತರ: ಮದ್ಯದ ಅಮಲಿನಲ್ಲಿ ಡಿಲೆವರಿ ಬಾಯ್ ಮೇಲೆ ಮಚ್ಚು ಬೀಸಿದ್ದವನನ್ನ ಬಂಧಿಸಿದ ವಿ.ವಿ.ಪುರಂ ಪೊಲೀಸರು

Bengaluru North, Bengaluru Urban | Sep 30, 2025
ಮದ್ಯದ ಅಮಲಿಲ್ಲಿ ಡಿಲೆವರಿ ಬಾಯ್ ಮೇಲೆ ಮಚ್ಚು ಬೀಸಿದ್ದ ಆರೋಪಿಯನ್ನ ವಿ.ವಿ.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕಳೆದ ವಾರ ಮಿನರ್ವ ಸರ್ಕಲ್ ಬಳಿ ತನ್ವೀರ್ ಖಾನ್ ಎಂಬಾತನ ಮೇಲೆ ಮಾರಕಾಸ್ತ್ರ ಬೀಸಿದ್ದ ಚಂದನ್ ಎಂಬಾತನನ್ನ ಬಂಧಿಸಲಾಗಿದೆ. ಪ್ರಕರಣದ ಕುರಿತು ಸೆಪ್ಟೆಂಬರ್ 30ರಂದು ಮಧ್ಯಾಹ್ನ 1 ಗಂಟೆಗೆ ಮಾಹಿತಿ ನೀಡಿದ ಪೊಲೀಸರು, 'ಬೆಳಗ್ಗಿನ ಜಾವ 1:30ರ ಸುಮಾರಿಗೆ ಬೈಕ್‌ನಲ್ಲಿ ಬಂದಿದ್ದ ಆರೋಪಿ ಚಂದನ್ ಹಾಗೂ ಮತ್ತೋರ್ವ, ಗೋದಾಮಿನ ಬಳಿ ನಿಂತಿದ್ದ ತನ್ವೀರ್ ಖಾನ್ ಮೇಲೆ ಹಲ್ಲೆಗೈದು ಪರಾರಿಯಾಗಿದ್ದರು.ಚಂದನ್ ಜೊತೆಗಿದ್ದ ಮತ್ತೋರ್ವ ಅಪ್ರಾಪ್ತನಾಗಿದ್ದು ಆತನ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ತಿಳಿಸಿದರು.
Read More News
T & CPrivacy PolicyContact Us