ಪುರಸಭಾ ವ್ಯಾಪ್ತಿಯ ವಾರ್ಡ್ ನಂ.2ರ ಮಲ್ಲಾಘಟ್ಟದಲ್ಲಿ ನಿವೇಶನ ರಹಿತರಿಗೆ ಹಂಚಲು ಮೀಸಲಿಟ್ಟಿದ್ದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಆರು ಮನೆಗಳನ್ನು ನಿರ್ಮಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಈ ಮಾಹಿತಿ ತಿಳಿದ ತಕ್ಷಣ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ನಾಗರಾಜಯ್ಯ ಸ್ಥಳಕ್ಕೆ ಧಾವಿಸಿ, ಪುರಸಭೆ ಅಧಿಕಾರಿಗಳನ್ನು ಕರೆಸಿ ಕಟ್ಟಡ ನಿರ್ಮಾಣ ತಕ್ಷಣ ನಿಲ್ಲಿಸಲು ಶನಿವಾರ ಮಧ್ಯಾಹ್ನ 3 ಗಂಟೆಯಲ್ಲಿ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಈಗಾಗಲೇ ಸುಮಾರು 4000 ಅರ್ಜಿಗಳನ್ನು ನಿವೇಶನ ರಹಿತರು ಪುರಸಭೆಗೆ ಸಲ್ಲಿಸಿದ್ದಾರೆ. ಆದರೆ ಅರ್ಹ-ಅನರ್ಹರ ಪಟ್ಟಿಯನ್ನು ತಯಾರಿಸುವ ಬದಲು ಕಾಲಹರಣ ಮಾಡುತ್ತಾ, ಒಂದು ಪಕ್ಷದ ಹಿಂಬಾಲಕರಿಗೆ ಮಾತ್ರ ಅ