ಹಾಸನ: ನಗರದ ಜಿಲ್ಲಾ ಕಸಾಪ ಭವನ ಆವರಣದಲ್ಲಿ ಪ್ರತಿಷ್ಠಾಪಿತವಾಗಿದ್ದ ಪಾಂಚಜನ್ಯ ಹಿಂದೂ ಗಣಪತಿ ವಿಸರ್ಜನಾ ಶೋಭಾಯಾತ್ರೆ ಬುಧವಾರ ಮಧ್ಯಾಹ್ನ ಅದ್ಧೂರಿಯಾಗಿ ಆರಂಭಗೊಂಡಿತು. ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.ಮಧ್ಯಾಹ್ನ 3ಕ್ಕೆ ಪ್ರಾರಂಭವಾದ ಪಾಂಚಜನ್ಯ ಗಣಪತಿ ಶೋಭಯಾತ್ರೆಯು ಸಾಲಗಾಮೆ ರಸ್ತೆ, ಅರಳೇ ಪೇಟೆ ರಸ್ತೆ, ಬಸವೇಶ್ವರ ದೇವಸ್ಥಾನ, ಹೊಸಲೇನ್ ರಸ್ತೆ, ಬಿ.ಎಂ. ರಸ್ತೆ, ಸುಭಾಷ್ ಚೌಕ ಇತರೆ ರಾಜ ಬೀದಿಗಳಲ್ಲಿ ಸಾಗಿತು. ಶ್ರೀರಾಮನ ಪ್ರತಿಮೆ, ಕೆಂಪೇಗೌಡ, ಯೋಧನ ಕಟೌಟ್, ಗೋವುಗಳು ಹಾಗೂ ಡಿಜೆಗಳು ಆಕರ್ಷಣೆ ಯಾಗಿದ್ದವು. ಶೋಭಾಯಾತ್ರೆಯಲ್ಲಿ ಶಾಸಕರಾದ ಹೆಚ್.ಪಿ. ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು, ಹೆಚ್.ಕೆ. ಸುರೇಶ್, ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ, ಇತರರು ಇದ್ದರು