ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಸೆ.೦೪ ರಂದು ಶಿವಶರಣ ನೂಲಿ ಚಂದಯ್ಯನವರ ೯೧೮ನೇ ಅದ್ದೂರಿ ಜಯಂತೋತ್ಸವವನ್ನು ಮಾಡುವುದಾಗಿ ಸಮಾಜ ಅಧ್ಯಕ್ಷ ಎಸ್ ಎಸ್ ಸಂಗಮದ ಸೆ.೦೩ ಸಾಯಂಕಾಲ ೬ ಗಂಟೆಗೆ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಶರಣ ನೂಲಿ ಚಂದಯ್ಯನವರ ಭಾವ ಚಿತ್ರ ಮೆರವಣಿಗೆಯನ್ನು ಮುತ್ತೈದೆಯರಿಂದ ಕುಂಭ ಮೆರವಣಿಗೆ ಮೂಲಕ ನಗರದ ಪ್ರಮುಖ ಬಿದಿಗಳಲ್ಲಿ ಸಾಗಿ ವಿಜಯ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ೧ ಗಂಟೆಗೆ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಸುದ್ದಿಗೋಷ್ಠಿಯಲ್ಲಿ ಸಮಾಜದ ಹಿರಿಯರು ಮುಖಂಡರು ಇದ್ದರು.