Download Now Banner

This browser does not support the video element.

ಅಫಜಲ್ಪುರ: ಮಳೆಗೆ ಕೊಚ್ಚಿ ಹೋದ ಮಣ್ಣೂರ-ಕರಜಗಿ ಮದ್ಯದ ಕಿರಹಳ್ಳ ರಸ್ತೆ: ಸಂಚಾರ ಸ್ಥಗಿತ

Afzalpur, Kalaburagi | Sep 11, 2025
ಅಫಜಲಪುರ ತಾಲೂಕಿನ ಮಣ್ಣೂರ ಕರಜಗಿ ಮಾರ್ಗ ಮಧ್ಯದ ಕಿರಹಳ್ಳ ಸೇತುವೆ ಪಕ್ಕದ ರಸ್ತೆ ಭಾರಿ ಮಳೆಗೆ ಕೊಚ್ಚಿ ಹೋಗಿದ್ದು, ಗುರುವಾರ ಬೆಳಗ್ಗೆಯಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬಸ್, ಲಾರಿ, ಕಾರು ಸೇರಿದಂತೆ ಎಲ್ಲಾ ನಾಲ್ಕು ಚಕ್ರದ ವಾಹನಗಳು ಚಲಿಸಲಾರದ ಪರಿಸ್ಥಿತಿ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು ಪರ್ಯಾಯ ರಸ್ತೆ ನಿರ್ಮಿಸದೇ ಸೇತುವೆ ಕಾಮಗಾರಿ ಕೈಗೊಂಡಿರುವುದೇ ಸಮಸ್ಯೆಗೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪರ್ಯಾಯ ರಸ್ತೆ ತಕ್ಷಣ ನಿರ್ಮಿಸಿ ಸಂಚಾರ ಸುಗಮಗೊಳಿಸಲು ಸ್ಥಳೀಯರು ಗುರುವಾರ ಐದು ಗಂಟೆಗೆ ಆಗ್ರಹ ವ್ಯಕ್ತಪಡಿಸಿದ್ದಾರೆ.
Read More News
T & CPrivacy PolicyContact Us