ಹುಬ್ಬಳ್ಳಿಯ ರಾಮನಗರದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ವಿಘ್ನೇಶ್ವರನ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ಭಾಗವಹಿಸಿ, ಭಕ್ತರಿಗೆ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ ಚಲವಾದಿ, ಸತೀಶ ಚಲವಾದಿ, ಹನುಮಂತ ಚಲವಾದಿ, ಅಶೋಕ ವಾಲ್ಮೀಕಿ, ಆನಂದ ಕಾಳೆ, ಪ್ರವೀಣ ಹುರಳಿ, ಪ್ರಶಾಂತ ಜಾಧವ, ಮಲ್ಲಪ್ಪ ಶಿರಕೋಳ, ಕೃಷ್ಣ ಗಂಡಗಾಳೇಕರ ಹಾಗೂ ಇತರರು ಉಪಸ್ಥಿತರಿದ್ದರು.