Download Now Banner

This browser does not support the video element.

ಯಲ್ಲಾಪುರ: ಹಿಟ್ಟಿನ ಬೈಲ್ ಬಳಿ ಜವರಾಯನ ಅಟ್ಟಹಾಸ, ನಿಂತಿದ್ದ ಲಾರಿಗೆ ಗುದ್ದಿದ ಬಸ್,ಧರ್ಮಸ್ಥಳಕ್ಕೆ ಹೊರಟವರ ದುರಂತ ಅಂತ್ಯ

Yellapur, Uttara Kannada | Aug 16, 2025
ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಬಳಿ ಬಸ್ ನಿಂತಿದ್ದ ಲಾರಿg ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದು ಏಳು ಜನ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.ಕೆಎಸ್‌ಆರ್‌ಟಿಸಿ ಬಸ್ ಅಮೀನಗಡದಿಂದ ಮಂಗಳೂರಿಗೆ ತೆರಳುತ್ತಿತ್ತು ಯಲ್ಲಾಪುರದ ಹಿಟ್ಟಿನಬೈಲ್ ಬಳಿ ಇಂಡಿಕೇಟರ್ ಹಾಕದೆ ಹೆದ್ದಾರಿ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿದೆ. ಅವರಲ್ಲಿ ಹೆಚ್ಚಿನವರು ಧರ್ಮಸ್ಥಳಕ್ಕೆ ತೆರಳುತ್ತಿದ್ದರೆಂದು ತಿಳಿದುಬಂದಿದೆ.ಬಾದಾಮಿ ತಾಲೂಕು ಗುಳೆದಗುಡ್ಡ ನಿವಾಸಿ ನೀಲವ್ವ ಹರದೊಳ್ಳಿ ( 40), ಜಾಲಿಹಾಳ ಗ್ರಾಮದ ಗಿರಿಜವ್ವಾ ಬೂದನ್ನವರ (30)ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಸುಮಾರು45 ವರ್ಷದ ಇನ್ನೋರ್ವ ವ್ಯಕ್ತಿಯ ಹೆಸರು ತಿಳಿದು ಬಂದಿದೆ.
Read More News
T & CPrivacy PolicyContact Us