ಮಕ್ಕಳಿಗೆ ಕಾಡುವ ಥೆಲೆಸಿಮಿಯಾ ರೋಗವನ್ನು ಹೋಗಲಾಡಿಸಲು ರಕ್ತದ ಅವಶ್ಯಕತೆ ಇದ್ದು ಅದಕ್ಕಾಗಿ ಜೂನ್ ೮ ಭಾನುವಾರದಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಳಕಲ್ದ ಮಹೇಶ್ವರಿ ಚಿಕ್ಕಮಕ್ಕಳ ಆಸ್ಪತ್ರೆಯ ಮುಖ್ಯ ವೈದ್ಯ ಡಾ ಪವನಕುಮಾರ ದರಕ ಹೇಳಿದರು. ಜೂನ್ ೦೫ ಸಾಯಂಕಾಲ ೪ ಗಂಟೆಗೆ ತಮ್ಮ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾನಾಡಿದ ಅವರು ರಕ್ತದಾನ ಒಂದು ಪವಿತ್ರ ಕಾರ್ಯ ಅದನ್ನು ನಮ್ಮ ಆಸ್ಪತ್ರೆ ಕಳೆದ ಏಳು ವರ್ಷಗಳಿಂದ ನಡೆಸುತ್ತಾ ಬಂದಿದೆ ಪ್ರತಿ ಸಲವೂ ಉತ್ತಮ ಪ್ರತಿಕ್ರಿಯೆ ದೊರೆತಿದೆ ಈ ಸಲವೂ ಎಲ್ಲರೂ ಸೇರಿ ಅದನ್ನು ಮತ್ತಷ್ಟು ಯಶಸ್ವಿಗೊಳಿಸೋಣ ಎಂದು ಹೇಳಿದರು. ಈ ಸಮಯದಲ್ಲಿ ರಾಮಾನುಜಾಚಾರ್ಯ ಫೌಂಡೇಶನ್ ಅಧ್ಯಕ್ಷ ಯತಿರಾಜ ದರಕ, ಕಾರ್ಯದರ್ಶಿ ಅಭಿಷೇಕ ದರಕ ಡಾ ಮಧುಭಾವಿ