Download Now Banner

This browser does not support the video element.

ಶಿವಮೊಗ್ಗ: ಹಬ್ಬಗಳನ್ನ ಸೌಹಾರ್ದತೆಯಿಂದ ಆಚರಿಸಿ: ನಗರದಲ್ಲಿ ಎಸ್ಪಿ ಮಿಥುನ್ ಕುಮಾರ್ ಕರೆ

Shivamogga, Shimoga | Aug 25, 2025
ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಿ ನಗರದಲ್ಲಿ ಶಾಂತಿ ನೆಲೆಸುವಂತೆ ನಡೆದುಕೊಳ್ಳಿ ಎಂದು ಎಸ್ಪಿ ಜಿ.ಕೆ. ಮಿಥನ್ ಕುಮಾರ್ ಕರೆ ನೀಡಿದರು. ನಗರದ ಸೋಮಿನಕೊಪ್ಪದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಶಾಂತಿ ಸಭೆ ನಡೆಸಿ ಮಾತನಾಡಿದ ಅವರು ಅವರವರ ಧರ್ಮ ಅವರಿಗೆ ಶ್ರೇಷ್ಟವಾಗಿದೆ. ಜಾತಿ ಧರ್ಮದ ಬೇಧ ಭಾವನೆ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಬೇರೆ ಬೇರೆ ಧರ್ಮದ ಹಬ್ಬದಲ್ಲಿ ತೊಡಗಿಕೊಳ್ಳುವ ಮೂಲಕ ಭಾವೈಕ್ಯದೊಂದಿಗೆ ಹಬ್ಬವನ್ನು ಸಂಭ್ರಮಿಸಿ ಎಂದರು. ಗಣಪತಿ ಸೇವಾ ಸಮಿತಿಯ ಕಾರ್ಯಕರ್ತರು ಪೆಂಡಾಲ್ ಹತ್ತಿರ ಮತ್ತು ವಿಸರ್ಜನೆ ಮೆರವಣಿಗೆಯಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಹೊರಗಿನಿಂದ ಬಂದಿರುವವರ ಮೇಲೆ ನಿಗಾವಹಿಸಿ ಎಂದರು.
Read More News
T & CPrivacy PolicyContact Us