ಹಾಸನ: ವಿದ್ಯಾರ್ಥಿನಿಯೋಬ್ಬಳ ಕೆಲಸಕ್ಕೆ ಸಾರಿಗೆ ಬಸ್ ನ ಕಂಡಕ್ಟರ್ ಮೇಲೆ ಅವಳ ಕುಟುಂಬಸ್ಥರು ಹಲ್ಲೆ ಮಾಡಿರುವ ಘಟನೆ ಹಾಸನ ತಾಲೂಕಿನ ಅಂಕನಾಯಕನಹಳ್ಳಿ ಬಳಿ ಗುರುವಾರ ನಡೆದಿದೆ.ನೆನ್ನೆ ಹಾಸನದಿಂದ ಅರಕಲಗೂಡಿಗೆ ತರಲೇಬೇಕಿದ್ದ ಅರಕಲಗೂಡು ವಿಭಾಗದ ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕರು ಹಾಸನದ ಸಾರಿಗೆ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ಊಟಕ್ಕಾಗಿ ನಿಲ್ಲಿಸಿದ್ದಾರೆ, ಇದಕ್ಕೂ ಮೊದಲು ಕಾಲೇಜು ವಿದ್ಯಾರ್ಥಿನಿ ಒಬ್ಬಳು ಅದೇ ಬಸ್ ನಲ್ಲಿ ಪ್ರಯಾಣಿಸಲು ಬಸ್ ಹತ್ತಲು ಬಂದಾಗ ನಿರ್ವಾಹಕ ಈ ಬಸ್ ಹೊರಡುವುದು ತಡವಾಗುತ್ತದೆ ಇದರ ಪಕ್ಕದಲ್ಲಿ ಮತ್ತೊಂದು ಬಸ್ ಈಗಾಗಲೇ ಹೊರಟಿದೆ ಅದರ ಮೂಲಕ ಪ್ರಯಾಣಿಸಿ ಎಂದು ಸಲಹೆ ನೀಡಿದ್ದಾನೆ ಅಷ್ಟೇ. ಇಷ್ಟಕ್ಕೆ ಕೆರಳಿದ ವಿದ್ಯಾರ್ಥಿನಿ ಇದು ಸರ್ಕಾರದ ಬಸ್ ಎಷ್ಟು ಹೊತ್ತಾದರೂ ನಾನು ಇದೇ ಬಸ್ನಲ್ಲ