ಹುಬ್ಬಳ್ಳಿ: ಮೇಯರ್ ಜೊತೆ ಮಾತುಕತೆ 9 ನೇ ಆವೃತ್ತಿಯನ್ನು ಇಂದು ಪಾಲಿಕೆಯ ಕಚೇರಿಯಲ್ಲಿ ಹುಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ್ ಅವರು ನಡೆಸಿಕೊಟ್ಟರು. ಜನರ ಹಲವು ಅಹವಾಲುಗಳನ್ನು ಸ್ವೀಕರಿಸಿ, A B C ವರ್ಗದಲ್ಲಿ ವಿಂಗಡಿಸಿದ್ದು ತ್ವರಿತ ಗತಿಯಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಈ ವೇಳೆ ಉಪಮೇಯರ್ ಸಂತೋಷ್ ಚವ್ಹಾನ್, ವಿವಿಧ ಇಲಾಖೆಯ ಅಧಿಕಾರಿಗಳು, ಪಾಲಿಕೆ ಸದಸ್ಯರುಗಳು ಸೇರಿದಂತೆ ಉಪಸ್ಥಿತರಿದ್ದರು.