ಆಗಸ್ಟ್ 24ರ ಸಂಜೆ 5:00 ಗಂಟೆ ಸುಮಾರಿಗೆ ಹೆಣ್ಣೂರಿನ ರಸ್ತೆ ಜಲಾವೃತವಾಗಿತ್ತು. ವಾಹನ ಸವಾರರು ಓಡಾಟ ನಡೆಸಲು ಪರದಾಡಿದ ಚಿತ್ರಣ ಕಂಡು ಬಂತು. ಕಾವೇರಿ ಪೈಪ್ ಒಡೆದಿದ್ದು ರಸ್ತೆ ಕುಸಿದಿತ್ತು. ಈ ಹಿನ್ನಲೆ ಜನಸಾಮಾನ್ಯರು ಸಾಕಷ್ಟು ಪರದಾಟ ಅನುಭವಿಸಿದ್ದರು. ಇಡೀ ರಸ್ತೆ ಹೊಳೆಯಂತಾಗಿದ್ದು ಪೈಪ್ ಲೈನ್ ದುರಸ್ತಿ ಕಾರ್ಯ ಜಲ ಮಂಡಳಿ ಮಾಡದೆ ಇರುವುದು ಜನರ ಕಣ್ಣು ಕೆಂಪು ಮಾಡಿತು.