Download Now Banner

This browser does not support the video element.

ಮಧುಗಿರಿ: ಒಂದು ತಿಂಗಳಾದರೂ ತಣ್ಣಗಾಗದ ಕಿಚ್ಚು: ಕೋಡಿಗೆನಹಳ್ಳಿಯಲ್ಲಿ ಕೆಎನ್ ರಾಜಣ್ಣ ಬೆಂಬಲಿಗರ ಭಾರೀ ಆಕ್ರೋಶ

Madhugiri, Tumakuru | Sep 11, 2025
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ, ಸಚಿವ ಸ್ಥಾನದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾ ಮಾಡಿದ ನಿರ್ಧಾರವನ್ನು ಖಂಡಿಸಿ ಭಾರೀ ಪ್ರತಿಭಟನೆ ಗುರುವಾರ ಮಧ್ಯಾಹ್ನ 12 ಗಂಟೆಯಿಂದ ನಡೆಯಿತು. ಸುಮಾರು ಸಾವಿರಕ್ಕೂ ಹೆಚ್ಚು ಬೆಂಬಲಿಗರು ಗ್ರಾಮದಲ್ಲಿ ಜಮಾವಣೆಗೊಂಡು, ಕೆಎನ್ ರಾಜಣ್ಣ ಅವರ ಭಾವಚಿತ್ರಗಳನ್ನು ಹಿಡಿದು “ನಮಗೆ ನ್ಯಾಯ ಬೇಕು – ಸಚಿವ ಸ್ಥಾನ ಬೇಕು” ಎಂದು ಘೋಷಣೆ ಕೂಗಿದರು. ಸಚಿವ ಸ್ಥಾನ ಕಳೆದು ಒಂದು ತಿಂಗಳಾದರೂ ರಾಜಣ್ಣ ಬೆಂಬಲಿಗರ ಕೋಪ ತಣ್ಣಗಾಗದೆ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಹೈಕಮಾಂಡ್ ಕೂಡಲೇ ಕೆಎನ್ ರಾಜಣ್ಣರಿಗೆ ಸಚಿವ ಸ್ಥಾನ ನೀಡಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
Read More News
T & CPrivacy PolicyContact Us