ಹಲವು ದಿನಗಳ ಹಿಂದೆ ಕಿಡಿಗೇಡಿಗಳ ಕೃತ್ಯದಿಂದ ಶಿವಮೊಗ್ಗ ನಗರದ ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿದ್ದ ದೇವರ ವಿಗ್ರಹಗಳು ಹಾನಿಗೊಳಗಾಗಿದ್ದವು. ಇಂದು ದೇವಸ್ಥಾನವನ್ನು ನೂತನವಾಗಿ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಶಾಸಕ ಎಸ್.ಎನ್ ಚನ್ನಬಸಪ್ಪ ದೇವಸ್ಥಾನದ ಹೊಸಲು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ದೇವಾಲಯದ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡು, ಇದು ಭಕ್ತರ ಆತ್ಮೀಯ ಶ್ರದ್ಧಾ ಕೇಂದ್ರವಾಗಿ ಹಾಗೂ ಸಮಾಜದ ಧಾರ್ಮಿಕ, ಸಾಂಸ್ಕೃತಿಕ ಏಕತೆಯ ಸಂಕೇತವಾಗಿ ರೂಪಾಂತರಗೊಳ್ಳಲೆಂದು ಶಾಸಕರು ಹಾರೈಸಿದರು