Download Now Banner

This browser does not support the video element.

ಚಿಕ್ಕಮಗಳೂರು: ಅಂತೂ ಕೂಡಿ ಬಂತು ರಾಷ್ಟ್ರೀಯ ಹೆದ್ದಾರಿ 173 ರ ಅಭಿವೃದ್ಧಿಗೆ ಶುಭಕಾಲ..!. ಮೂಡಿಗೆರೆ-ಚಿಕ್ಕಮಗಳೂರು ರಸ್ತೆ ಅಭಿವೃದ್ಧಿಗೆ ಮೀಟಿಂಗ್..!.

Chikkamagaluru, Chikkamagaluru | Sep 4, 2025
ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ಕುರಿತು ಗುರುವಾರ ಎರಡು ಗಂಟೆ ಸುಮಾರಿಗೆ ಸಭೆ ನಡೆಸಿದ್ರು. ಚಿಕ್ಕಮಗಳೂರು ಮೂಡಿಗೆರೆ ನಡುವಿನ ರಾಷ್ಟ್ರೀಯ ಹೆದ್ದಾರಿ 173 ರ ಕಾಮಗಾರಿಯ ಟೆಂಡರ್ ಹಾಗೂ ಮರಗಳನ್ನು ತೆರವುಗೊಳಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಜೊತೆಗೆ ಮಳೆಗಾಲ ಮುಗಿದ ನಂತರ ಸಮರ್ಪಕವಾಗಿ ಹೆದ್ದಾರಿಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
Read More News
T & CPrivacy PolicyContact Us