ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಜಗ್ವಾರ್ ಗಂಡು ಹುಲಿ ಸಾವನ್ನಪ್ಪಿದೆ. ಸುಮಾರು 7.7 ವರ್ಷ ವಯಸ್ಸಿನ “ವಿಕ್ರಂ” ಜಾಗ್ವಾರ್ ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ವೈಫಲ್ಯದಿಂದ ತೀವ್ರ ವಾಗಿ ಬಳಲಿ ಸಾವನ್ನಪ್ಪಿದೆ. ಹುಲಿ ಸಾವಿಗೆ ಮೈಸೂರು ಮೃಗಾಲಯವು ಸಂತಾಪ ವ್ಯಕ್ತಪಡಿಸಿದೆ. ಜಾಗ್ವಾರ್ ಹುಲಿ ಕಳೆದ ಎರಡು ದಿನಗಳಿಂದ ಊಟ ತ್ಯಜಿಸಿತ್ತು. ಆದರೂ ನಿರಂತರ ಚಿಕಿತ್ಸೆ ಕೊಡಲಾಗುತ್ತಿತ್ತು.